Archive for ಮಾರ್ಚ್, 2012
ಮಾವಿನ ಕನವರಿಕೆ…
ಯುಗಾದಿ ಬಂತು. ಊರ ತುಂಬೆಲ್ಲ ಹಸಿರ ತೋರಣ ಹೊಸೆಯಲು ಮರಗಳು ಸಿದ್ಡವಾದಂತಿವೆ. ಈಗಾಗಲೇ ಗುಲ್ಮೊಹರುಗಳು ಮೈತುಂಬ ಹೂ ತುಂಬಿಕೊಂಡು ಮದುವಣಗಿತ್ತಿಯರಂತೆ ಶೋಭಿಸುತ್ತಿವೆ. ಇನ್ನೂ ಅವುಗಳಿಂದ ಹೂ ಉದುರುತ್ತ ಬಯಲಲ್ಲೇ ಹೂವಿನ ಹಾಸಿಗೆ ಹೊಸೆಯುವುಷ್ಟೆ ಬಾಕಿ.
ಆದರೆ ಯಾಕೋ ನಮ್ಮ ಆಫೀಸಿನ ಮುಂದಣ ಎರಡು ಮಾವಿನ ಮರಗಳು ಈ ಬಾರಿ ವಸಂತನ ಜೊತೆ ಮುನಿಸಿಕೊಂಡಂತಿವೆ. ಒಂದು ಚಿಗುರೆಲೆಯಿಲ್ಲ, ಹೂವಿಲ್ಲ. ಈ ಬಾರಿ ಮಾವಿನ ಕಾಯಿ ಬಿಡುವ ಲಕ್ಷಣಗಳೇ ಇಲ್ಲ. ಸಂಜೆ ಟೀಗೆ ಹೊರಹೋಗುವ ಮುನ್ನ ಇವುಗಳತ್ತಲೊಮ್ಮೆ ನೋಡಿ ಹೂ ಹುಡುಕಿ ನಿರಾಶನಾಗುವುದು ನಡೆದೇ ಇದೆ.
ಸುಮ್ಮನೆ ನೆನಪಿಸಿಕೊಂಡೆ, ನಾನು ಕಳೆದ ವರ್ಷ ಎಷ್ಟು ಮಾವಿನ ಹಣ್ಣು ತಿಂದಿರಬಹುದು ಅಂತ. ಒಂದೇ ಹೋಳು! ಅದು ಮೈಸೂರಿನಲ್ಲಿ. ವರ್ಷವೆಲ್ಲ ಹುಬ್ಬಳ್ಳಿಯಲ್ಲೇ ಇದ್ದರೂ ಒಂದು ಮಾವಿನಹಣ್ಣು ತಿನ್ನಲಾಗಲಿಲ್ಲ. ತಮಾಷೆ ಅಂದರೆ ಇಲ್ಲಿನ ’ಮೆಟ್ರೊ’ಪುರವಣಿಗೆ ಮಾವಿನ ಬಗ್ಗೆ ಎರಡೆರಡು ಲೇಖನ ಬರೆದರೂ ಒಂದು ಹಣ್ಣು ತಿನ್ನಲಾಗಲಿಲ್ಲ ಅಂತ.
ಹಾಗಂತ ನಂಗೆ ಮಾವು ಇಷ್ಟಯಿಲ್ಲ ಅಂತಲ್ಲ. ಈ ಮಾವಿಗೂ ನನ್ನ ಬಾಲ್ಯಕ್ಕೂ ಒಂಥರ ನಂಟು ಬೆಳೆದಿದೆ. ಚಿಕ್ಕವನಿದ್ದಾಗ ಶಾಲೆಗೆ ರಜ ಬಂತೆಂದರೆ ಬಹುಹೊತ್ತು ಕಳೆಯುತ್ತಿದ್ದುದು ಮಾವಿನ ತೋಟದಲ್ಲೇ.
ಮರದ ತುಂಬೆಲ್ಲ ಚಿಟ್ಟೆಗಳಂತೆ ತುಂಬಿಕೊಂಡ ಮಾವಿನ ಕಾಯಿಗಳನ್ನು ನೋಡುವುದೇ ಒಂದು ಸೊಗಸು. ಚಿಕ್ಕ ಗಿಡದಲ್ಲಿ ನೇತಾಡುವ ಮಾವುಗಳನ್ನು ನೇವರಿಸುವುದು ಇನ್ನಷ್ಟು ಸೊಗಸು. ನಮ್ಮಲ್ಲಿ ತೋಟವಿರದಿದ್ದರೂ ಪಕ್ಕದ ಮನೆಯವರು ತೋಟಕ್ಕೆ ಹೊರಟಾಗ ಅವರ ಬೆನ್ನು ಹತ್ತುತ್ತಿದುದು ಇದೇ ಕಾರಣಕ್ಕೆ.
ಆಮೇಲೆ ಜೋಡಿ ಬದಲಾಯಿತು. ದೊಡ್ಡವನಾದಂತೆ ಗೆಳೆಯರ ಮಾವಿನ ತೋಟಗಳು ಸೆಳೆದವು. ಕಂಡವರ ಮಾವಿನ ಮರಕ್ಕೆ ಕಲ್ಲು ಹೊಡೆದು ಮಾವಿನ ಕಾಯಿ ಉದುರಿಸುವುದು ಅಭ್ಯಾಸವಾಯಿತು. ಹತ್ತನೇ
ಕ್ಲಾಸಿನ ಪರೀಕ್ಷೆಗೆ, ಪಿಯುಸಿ ಪರೀಕ್ಷೆಗೆ ಓದಿಕೊಂಡಿದ್ದು ಇಂತಹದ್ದೇ ಮಾವಿನ ತೋಪುಗಳ ಕೆಳಗೆ ಎಂಬುದು ಈಗ ಸವಿನೆನಪು.
ಆಗೆಲ್ಲ ಏನೆಲ್ಲ ಮಾಡಿ ಸವಿಯುತಿದ್ದ ಮಾವಿನ ರುಚಿ ಈಗ್ಯಾಕೆ ನಾಲಿಗೆಗೆ ಹತ್ತುತ್ತಿಲ್ಲ ಎಂಬ ಗೊಂದಲ. ಈ ಬಾರಿ ಒಂದಷ್ಟು ಮಾವು ತಿನ್ನಲೇಬೇಕು ಎಂಬುದು ಸದ್ಯದ ಹಂಬಲ.
ಮರದ ತುಂಬೆಲ್ಲ ಚಿಟ್ಟೆಗಳಂತೆ ತುಂಬಿಕೊಂಡ ಮಾವಿನ ಕಾಯಿಗಳನ್ನು ನೋಡುವುದೇ ಒಂದು ಸೊಗಸು. ಚಿಕ್ಕ ಗಿಡದಲ್ಲಿ ನೇತಾಡುವ ಮಾವುಗಳನ್ನು ನೇವರಿಸುವುದು ಇನ್ನಷ್ಟು ಸೊಗಸು. ನಮ್ಮಲ್ಲಿ ತೋಟವಿರದಿದ್ದರೂ ಪಕ್ಕದ ಮನೆಯವರು ತೋಟಕ್ಕೆ ಹೊರಟಾಗ ಅವರ ಬೆನ್ನು ಹತ್ತುತ್ತಿದುದು ಇದೇ ಕಾರಣಕ್ಕೆ.
ಆಮೇಲೆ ಜೋಡಿ ಬದಲಾಯಿತು. ದೊಡ್ಡವನಾದಂತೆ ಗೆಳೆಯರ ಮಾವಿನ ತೋಟಗಳು ಸೆಳೆದವು. ಕಂಡವರ ಮಾವಿನ ಮರಕ್ಕೆ ಕಲ್ಲು ಹೊಡೆದು ಮಾವಿನ ಕಾಯಿ ಉದುರಿಸುವುದು ಅಭ್ಯಾಸವಾಯಿತು. ಹತ್ತನೇ
ಕ್ಲಾಸಿನ ಪರೀಕ್ಷೆಗೆ, ಪಿಯುಸಿ ಪರೀಕ್ಷೆಗೆ ಓದಿಕೊಂಡಿದ್ದು ಇಂತಹದ್ದೇ ಮಾವಿನ ತೋಪುಗಳ ಕೆಳಗೆ ಎಂಬುದು ಈಗ ಸವಿನೆನಪು.
ಆಗೆಲ್ಲ ಏನೆಲ್ಲ ಮಾಡಿ ಸವಿಯುತಿದ್ದ ಮಾವಿನ ರುಚಿ ಈಗ್ಯಾಕೆ ನಾಲಿಗೆಗೆ ಹತ್ತುತ್ತಿಲ್ಲ ಎಂಬ ಗೊಂದಲ. ಈ ಬಾರಿ ಒಂದಷ್ಟು ಮಾವು ತಿನ್ನಲೇಬೇಕು ಎಂಬುದು ಸದ್ಯದ ಹಂಬಲ.
ಇವರು ಹೀಗೆಂದರು..